ಲೋಕದಲ್ಲಿ ಪ್ರತಿಯೊಬ್ಬರೂ ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಆಚರಿಸಬೇಕಂಬ ಶೃಂಗೇರಿ ಜಗದ್ಗುರು ಮಹಾಸ್ವಾಮಿಗಳವರ ಆಶಯದಂತೆ ಶಂಕರಂ ಲೋಕ ಶಂಕರಂ ಕಾರ್ಯಕ್ರಮ.
ಶ್ರೀ ಶಂಕರ ಜಯಂತಿ ಮಹೋತ್ಸವದ ಅಂಗವಾಗಿ ಶಂಕರಗಿರಿಯಲ್ಲಿ ನೆಡೆಯುಲಿರುವ ಕಾರ್ಯಕ್ರಮಗಳು ಈ ಕೆಳಗಿನಂತೆ ಇವೆ.
ದಿನಾಂಕ 19/04/2026 ಭಾನುವಾರ ಸಂಜೆ 04:30ಕ್ಕೆ "ಶ್ರೀ ಶಂಕರಗಿರಿ ಪರಿಕ್ರಮ"
ಈ ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮದಲ್ಲಿ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠಾಧೀಶ್ವರರಾದ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರ ಪೂರ್ಣಾನುಗ್ರಹದೊಂದಿಗೆ ತತ್ಕರಕಮಲ ಸಂಜಾತರಾದ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು "ನಮಃ ಶಂಕರಾಯ" ಎಂಬ ಮಂತ್ರದ ಉಪದೇಶವನ್ನು ನೆರೆದ ಭಕ್ತರಿಗೆ ದಯಪಾಲಿಸಲಿದ್ದಾರೆ. ನಂತರ ನಾಮಜಪದೊಂದಿಗೆ ಶೃಂಗೇರಿಯ ವಾಸಿಗಳೆಲ್ಲರೂ ಸೇರಿ ಶ್ರೀ ಶಂಕರಗಿರಿಗೆ ಪ್ರದಕ್ಷಿಣೆ ಹಾಕುವ ಕಾರ್ಯಕ್ರಮವಿರುತ್ತದೆ.
ದಿನಾಂಕ 20/04/2026 ಸೋಮವಾರ ಮಧ್ಯಾಹ್ನ 04:30 ಕ್ಕೆ ಈ ಕೆಳಕಂಡ ಸ್ಪರ್ಧೆಗಳು ಮಕ್ಕಳಿಗಾಗಿ.
1) 01-05 ನೇ ತರಗತಿ ಮಕ್ಕಳಿಗೆ ಆದಿ ಶಂಕರಾಚಾರ್ಯರ ಚಿತ್ರಕ್ಕೆ ಸೂಕ್ತ ಬಣ್ಣ ತುಂಬಿಸುವುದು.
2) 06-10ನೇ ತರಗತಿ ಮಕ್ಕಳಿಗೆ ಆದಿ ಶಂಕರಾಚಾರ್ಯರ ಚಿತ್ರವನ್ನು ಬಿಡಿಸುವುದು.
ಇದೆ ದಿನ ಸಂಜೆ 06:00ಕ್ಕೆ ಶ್ರೀಯುತ ಗಣೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ನಾದಸಿರಿ ಸಂಗೀತ ವೃಂದದವರಿಂದ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರಿಂದ ರಚಿಸಲ್ಪಟ್ಟ ಆಯ್ದ ಸ್ತೋತ್ರಗಳ ಪಠಣ. ಈ ಸಂದರ್ಭದಲ್ಲಿ ಸ್ಥಳೀಯ ಶ್ರೇಷ್ಠ ಚಿತ್ರ ಕಲಾವಿದರಾದ ಶ್ರೀಯುತ ರಾಜಗೋಪಾಲ್ ರವರು ಸ್ಥಳದಲ್ಲಿಯೇ ಚಿತ್ರವನ್ನು ಬಿಡಿಸಲಿದ್ದಾರೆ.
21/04/2026 ಮಂಗಳವಾರ ಸಂಜೆ 04:30 ಕ್ಕೆ ಶ್ರೀಮಠದ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶಂಕರಜಯಂತಿ ಮಹೋತ್ಸವ - ತತ್ವಜ್ಞಾನಿಗಳ ದಿನಾಚರಣೆಯ ಸಭಾ ಕಾರ್ಯಕ್ರಮವಿರುತ್ತದೆ.
ಸ್ಪರ್ಧಿಸುವ ಮಕ್ಕಳಿಗೆ ವಿಶೇಷ ಸೂಚನೆ!
ಬಣ್ಣದ ಪೆನ್ಸಿಲ್ ಮತ್ತು writing pad ಮುಂತಾದ ಅಗತ್ಯ ಸಲಕರಣೆಗಳನ್ನು ಭಾಗವಹಿಸುವ ಮಕ್ಕಳೇ ತರುವುದು.
ಭಾಗವಹಿಸುವ ಎಲ್ಲಾ ಮಕ್ಕಳಿಗೂ ಪ್ರೋತ್ಸಾಹಕರ ಬಹುಮಾನವಿರುತ್ತದೆ.
ಆಯ್ದ ಉತ್ತಮ ಚಿತ್ರಗಳನ್ನು ಶಂಕರಗಿರಿಯಲ್ಲಿ ಪ್ರದರ್ಶಿಸಲಾಗುವುದು.
ಶೃಂಗೇರಿಯ ಶಂಕರಗಿರಿಯಲ್ಲಿ ನೆಡೆಯುವ ಈ ಶಂಕರ ಜಯಂತಿ ಮಹೋತ್ಸವಕ್ಕೆ ನೀವು ಬನ್ನಿ ನಿಮ್ಮವರನ್ನು ಕರೆತನ್ನಿ.


